ಐವತ್ತರ ದಶಕದಲ್ಲಿ ಹುಟ್ಟಿದವರು ಎಪ್ಪತ್ತರಲ್ಲಿ ಯುವಕರು. ಅವರಲ್ಲಿ ನಾನೂ ಒಬ್ಬ. ಭಾರತದಲ್ಲಿ ಸಾರ್ವಜನಿಕ ಶಿಕ್ಷಣ ಹಳ್ಳಿಗಳನ್ನು ತಕ್ಕ ಮಟ್ಟಿಗೆ ಮುಟ್ಟಿ ನನ್ನಂತ ಯುವಕರಲ್ಲಿ ಪ್ರತಿಯೊಂದು ವಿಚಾರಗಳಲ್ಲಿ ಜಿಜ್ಞಾಸೆಗಳೇ ಜಾಸ್ತಿ ಹುಟ್ಟುತ್ತಿದ್ದ ಕಾಲ. ಚಿಕ್ಕ ಮಕ್ಕಳಾಗಿದ್ದಾಗ ಹಿರಿಯರು ಹೇಳಿದ ಸಕಲವನ್ನು ತಕರಾರಿಲ್ಲದೇ ಒಪ್ಪಿಕೊಳ್ಳುತ್ತಿದ್ದ ನಾವು ಯುವ ಪ್ರಾಯದಲ್ಲಿ ಎಲ್ಲದಕ್ಕೂ ಅಭ್ಯಂತರವನ್ನು ಎತ್ತುತ್ತಿದ್ದೆವು. ರಾ ಸ್ವ ಸಂಘದ ಸ್ವಯಂಸೇವಕನಾಗಿ ಬೆಳೆದ ನಾನು ಪೂರ್ತಿ ನಾಸ್ತಿಕನಾಗದಿದ್ದರೂ ಸಂಪ್ರದಾಯದ ಅನೇಕ ಆಚರಣೆಗಳನ್ನು ಒಪ್ಪಲೂ ಆಗದೇ ನಿರಾಕರಿಸಲೂ ಆಗದೇ ತೊಳಲಾಡುತ್ತಿದ್ದ ಕಾಲ. ವೈಜ್ಞಾನಿಕ ದೃಷ್ಟಿಕೋಣ ಬೆಳೆಸಿಕೊಳ್ಳಬೇಕು ಎಂಬುದು ನಮ್ಮ ತರ್ಕ. ಈ ವೈಜ್ಞಾನಿಕ ದೃಷ್ಟಿಕೋಣ ಅಂದರೆ ನಮ್ಮ ಸಂಪ್ರದಾಯಗಳನ್ನು ಪ್ರಶ್ನಿಸುವುದು ಎಂಬ ತಪ್ಪು ಕಲ್ಪನೆಯೂ ಮನದಲ್ಲಿ ಹೂತಿತ್ತು.
ಅತ್ತ ರೂಢಿಗತ ನೇಮ ನಿಯಮಗಳನ್ನು ಒಪ್ಪಲಾಗದ, ಇತ್ತ ಪೂರ್ತಿ ರೇಷನಲಿಸ್ಟ್ ಆಗಲೂ ಒಪ್ಪದ ಸಂದಿಗ್ಧತೆಯಲ್ಲಿ ತೊಳಲಾಡುತ್ತಿತ್ತು ಮನಸ್ಸು. ಹಾಗಾಗಿ ಅನೇಕ ಸಾಂಪ್ರದಾಯಿಕ ಆಚರಣೆಗಳನ್ನು ಒಪ್ಪಲಾಗದ ಆದರೆ ವಿಮುಖನೂ ಆಗಲಾಗದ ಪರಿಸ್ಥಿತಿ. ದೇವಾಲಯಗಳಿಗೆ ನಿತ್ಯ ಹೋಗಿ ಬರುವವರನ್ನು ಕಂಡು ಅಸೂಯೆಯೋ ಯಾವುದೋ ಒಂದು ಅಭಾವ ಪ್ರಜ್ಞೆ ಎದ್ದು ಮನ ಖತಿಗೊಳ್ಳುತ್ತಿತ್ತು.
ಇಂತಿರುವಾಗ ಐದಾರು ವರ್ಷಗಳ ಹಿಂದೆ ತಿರುಪತಿ ದೇವರ ದರ್ಶನ ಯಾತ್ರೆಯ ಸೌಭಾಗ್ಯ ಒದಗಿತು. ವೆಂಕಟರಮಣನ ದರ್ಶನ ಅಂದರೆ ಅಷ್ಟು ಸುಲಭವಲ್ಲ, ಘಂಟೆಗಟ್ಟಳೆ ಸರತಿ ಸಾಲಿನಲ್ಲಿ ಕಾಯಬೇಕು, ಕೆಲವೊಮ್ಮೆ ಇಡೀ ದಿನ ಆಗ್ತದೆ, ಅಷ್ಟು ಹೊತ್ತು ನೂಕು ನುಗ್ಗಲಲ್ಲಿ ಹೋರಾಡಿ ದೇವರ ಹತ್ತಿರ ಹೋದರೆ ಜರಗಂಡಿ ಜರಗಂಡಿ ಎಂದು ನೂಕುತ್ತಾರೆ ಹಾಗೆ ಹೀಗೆ ಎಂದು ಹೆದರಿಕೆಯನ್ನು ಕೇಳಿಯೇ ಈ ಕಷ್ಟಕ್ಕೆ ದೇವರ ದರ್ಶನ ಮಾಡಬೇಕಾ, ದೇವರನ್ನು ಹೃದಯದಲ್ಲಿ ಕಾಣಬೇಕೇ ವಿನಾ ದೇವಸ್ಥಾನಕ್ಕೇ ಹೋಗಿ ನೋಡುವ ದರ್ದು ಏಕೆ! ಎಂಬ ಧೋರಣೆಯಿಂದ ತಿರುಪತಿ ಯಾತ್ರೆ ವಿಳಂಬವಾಗಿತ್ತು. (ದ್ರಾಕ್ಷಿ ಹುಳಿ!!) ಆದರೆ ನನ್ನ ಯಾತ್ರೆಯಲ್ಲಿ ಹಾಗೇನೂ ಅಡಚಣೆಗಳಾಗದೇ ಅನಾಯಾಸವೆಂಬಂತೆ ದರ್ಶನ ಭಾಗ್ಯ ಲಭಿಸಿತು. ನಮ್ಮ ಕ್ಯೂ ದೇವಸ್ಥಾನದ ಎದುರು ಬಂದಾಗ ನನ್ನೆದುರಿನವರು ನನಗಿಂತ ಕೊಂಚ ಗಿಡ್ಡವಾಗಿದ್ದ ಕಾರಣ ಬಾಗಿಲಿನಿಂದ ಭಗವಂತನ ಪಾದದ - ಸನಿಹದ ತನಕ ಅವನ ದಿವ್ಯ ಭವ್ಯ ರೂಪವನ್ನು ನೋಡುವ ಭಾಗ್ಯ ಸಿಕ್ಕಿತು. ಇನ್ನೇನಾಗಬೇಕು!! ಆ ಒಂದೆರಡು ನಿಮಿಷಗಳು ಸಾಕು. ಸನ್ನಿಧಿಯ ಬಳಿ ಬಂದಂತೆ ಯಾವ ಜರಗಂಡಿಯೂ ಇಲ್ಲ, ಯಾವುದೇ ಗೌಜಿಯಿಲ್ಲ, ನೂಕು ನುಗ್ಗಾಟಗಳಿಲ್ಲ, ಭಕ್ತಾದಿಗಳ 'ಗೋವಿಂದಾ ಗೋವಿಂದಾ' ಎಂಬ ಘೋಷಗಳೂ ಇಲ್ಲ..... ಕೇವಲ ಆತನ ಭವ್ಯ ದಿವ್ಯ ಮೂರ್ತಿ ಮಾತ್ರ... ಕೇವಲ ಐದಾರು ಕ್ಷಣಗಳಿರಬಹುದು,ಅಷ್ಟು ಸಾಕು ನನಗೆ... ಕಣ್ಣುಗಳಲ್ಲಿ, ಮನದಲ್ಲಿ, ಬುದ್ಧಿಯಲ್ಲಿ, ಎಲ್ಲೆಲ್ಲೂ ಆತನಿದ್ದ. ಮತ್ತಾರೂ ಇಲ್ಲ, ನಾನೂ ಇಲ್ಲ!! ಧನ್ಯನಾದೆ.🙏🙏🙏
ಅತ್ತ ರೂಢಿಗತ ನೇಮ ನಿಯಮಗಳನ್ನು ಒಪ್ಪಲಾಗದ, ಇತ್ತ ಪೂರ್ತಿ ರೇಷನಲಿಸ್ಟ್ ಆಗಲೂ ಒಪ್ಪದ ಸಂದಿಗ್ಧತೆಯಲ್ಲಿ ತೊಳಲಾಡುತ್ತಿತ್ತು ಮನಸ್ಸು. ಹಾಗಾಗಿ ಅನೇಕ ಸಾಂಪ್ರದಾಯಿಕ ಆಚರಣೆಗಳನ್ನು ಒಪ್ಪಲಾಗದ ಆದರೆ ವಿಮುಖನೂ ಆಗಲಾಗದ ಪರಿಸ್ಥಿತಿ. ದೇವಾಲಯಗಳಿಗೆ ನಿತ್ಯ ಹೋಗಿ ಬರುವವರನ್ನು ಕಂಡು ಅಸೂಯೆಯೋ ಯಾವುದೋ ಒಂದು ಅಭಾವ ಪ್ರಜ್ಞೆ ಎದ್ದು ಮನ ಖತಿಗೊಳ್ಳುತ್ತಿತ್ತು.
ಇಂತಿರುವಾಗ ಐದಾರು ವರ್ಷಗಳ ಹಿಂದೆ ತಿರುಪತಿ ದೇವರ ದರ್ಶನ ಯಾತ್ರೆಯ ಸೌಭಾಗ್ಯ ಒದಗಿತು. ವೆಂಕಟರಮಣನ ದರ್ಶನ ಅಂದರೆ ಅಷ್ಟು ಸುಲಭವಲ್ಲ, ಘಂಟೆಗಟ್ಟಳೆ ಸರತಿ ಸಾಲಿನಲ್ಲಿ ಕಾಯಬೇಕು, ಕೆಲವೊಮ್ಮೆ ಇಡೀ ದಿನ ಆಗ್ತದೆ, ಅಷ್ಟು ಹೊತ್ತು ನೂಕು ನುಗ್ಗಲಲ್ಲಿ ಹೋರಾಡಿ ದೇವರ ಹತ್ತಿರ ಹೋದರೆ ಜರಗಂಡಿ ಜರಗಂಡಿ ಎಂದು ನೂಕುತ್ತಾರೆ ಹಾಗೆ ಹೀಗೆ ಎಂದು ಹೆದರಿಕೆಯನ್ನು ಕೇಳಿಯೇ ಈ ಕಷ್ಟಕ್ಕೆ ದೇವರ ದರ್ಶನ ಮಾಡಬೇಕಾ, ದೇವರನ್ನು ಹೃದಯದಲ್ಲಿ ಕಾಣಬೇಕೇ ವಿನಾ ದೇವಸ್ಥಾನಕ್ಕೇ ಹೋಗಿ ನೋಡುವ ದರ್ದು ಏಕೆ! ಎಂಬ ಧೋರಣೆಯಿಂದ ತಿರುಪತಿ ಯಾತ್ರೆ ವಿಳಂಬವಾಗಿತ್ತು. (ದ್ರಾಕ್ಷಿ ಹುಳಿ!!) ಆದರೆ ನನ್ನ ಯಾತ್ರೆಯಲ್ಲಿ ಹಾಗೇನೂ ಅಡಚಣೆಗಳಾಗದೇ ಅನಾಯಾಸವೆಂಬಂತೆ ದರ್ಶನ ಭಾಗ್ಯ ಲಭಿಸಿತು. ನಮ್ಮ ಕ್ಯೂ ದೇವಸ್ಥಾನದ ಎದುರು ಬಂದಾಗ ನನ್ನೆದುರಿನವರು ನನಗಿಂತ ಕೊಂಚ ಗಿಡ್ಡವಾಗಿದ್ದ ಕಾರಣ ಬಾಗಿಲಿನಿಂದ ಭಗವಂತನ ಪಾದದ - ಸನಿಹದ ತನಕ ಅವನ ದಿವ್ಯ ಭವ್ಯ ರೂಪವನ್ನು ನೋಡುವ ಭಾಗ್ಯ ಸಿಕ್ಕಿತು. ಇನ್ನೇನಾಗಬೇಕು!! ಆ ಒಂದೆರಡು ನಿಮಿಷಗಳು ಸಾಕು. ಸನ್ನಿಧಿಯ ಬಳಿ ಬಂದಂತೆ ಯಾವ ಜರಗಂಡಿಯೂ ಇಲ್ಲ, ಯಾವುದೇ ಗೌಜಿಯಿಲ್ಲ, ನೂಕು ನುಗ್ಗಾಟಗಳಿಲ್ಲ, ಭಕ್ತಾದಿಗಳ 'ಗೋವಿಂದಾ ಗೋವಿಂದಾ' ಎಂಬ ಘೋಷಗಳೂ ಇಲ್ಲ..... ಕೇವಲ ಆತನ ಭವ್ಯ ದಿವ್ಯ ಮೂರ್ತಿ ಮಾತ್ರ... ಕೇವಲ ಐದಾರು ಕ್ಷಣಗಳಿರಬಹುದು,ಅಷ್ಟು ಸಾಕು ನನಗೆ... ಕಣ್ಣುಗಳಲ್ಲಿ, ಮನದಲ್ಲಿ, ಬುದ್ಧಿಯಲ್ಲಿ, ಎಲ್ಲೆಲ್ಲೂ ಆತನಿದ್ದ. ಮತ್ತಾರೂ ಇಲ್ಲ, ನಾನೂ ಇಲ್ಲ!! ಧನ್ಯನಾದೆ.🙏🙏🙏

No comments:
Post a Comment