Tuesday, April 12, 2011

Shilpa Soundaryada bennu hathhi...

"ಶಿಲ್ಪಕಲೆಯ ಬಗ್ಗೆ ಹೇಳಬೇಕೆಂದರೆ ನಮ್ಮ ಲಕ್ಕುಂಡಿ ಎಲಿಮೆಂಟರಿ ಸಾಲಿ,ಹಂಪಿ ಹೈಸ್ಕೂಲು ಮತ್ತ ಬೇಲೂರು ಯುನಿವರ್ಸಿಟಿ  ನೋಡ್ರಿ  ಸರ"  ಲಕ್ಕುಂಡಿಯ ಮ್ಯುಸಿಯಮ್ಮಿನ ಅಧಿಕಾರಿಯೊಬ್ಬರು ತುಂಬಾ ಅಭಿಮಾನದಿಂದ ಹೇಳಿದರು. ಅವರ ಅಭಿಮಾನ ಲಕ್ಕುಂಡಿಯ ವೈಭವದ ಮೇಲೋ, ಕರ್ನಾಟಕದ ಒಟ್ಟು ಶಿಲ್ಪಕಲೆಯ ಮೇಲೋ ತಿಳಿಯಲಿಲ್ಲ.ಆದರೂ
ಅವರ ವಿಚಾರಗಳನ್ನು  ಮೆಚ್ಚದಿರಲು ಆಗಲಿಲ್ಲ.ಇನ್ನು ಕಲೆಯ ಯುನಿವರ್ಸಿಟಿಯನ್ನು ಒಮ್ಮೆ  ನೋಡಲೇ ಬೇಕೆಂಬ ಆಶೆ ಹುಟ್ಟಿತು. ಆ ಪ್ರಕಾರವಾಗಿ ಮೊನ್ನೆ ಆದಿತ್ಯವಾರ ನಾವು ಅಂದರೆ ನಾಗೇಶನ ಗ್ರೂಪು ಅವನ ಕಾರಿನಲ್ಲಿ ನಮ್ಮ ಫ್ಯಾಮಿಲಿ ನಮ್ಮ ಕಾರಿನಲ್ಲಿ-ಪಾವನ ಸಹಿತ-ಬೆಳಗ್ಗೆ ಬೇಗ ಹೊರಟೆವು.ಹೋಗುವ ದಾರಿ ಉತ್ತಮ ಸ್ಥಿತಿಯಲ್ಲಿತ್ತು.ಹಾಗಾಗಿ ತುಂಬಾ ಅನುಕೂಲವಾಯಿತು.ಭಾಗ್ಯ ದೀಪಕ್ ಸಹ ಬಂದರು.ಬೇಲೂರನ್ನು ಸುಮಾರು ಹತ್ತುವರೆಗೆ ತಲುಪಿದೆವು. ಸುಮಾರು ಇಪ್ಪತ್ತು ವರುಷಗಳ ಹಿಂದೆ ನೋಡಿದ್ದ ನೆನಪು.ಆಗ ಇಷ್ಟು ವ್ಯವಸ್ಥೆಗಳಿರಲಿಲ್ಲ.ಶಿಲ್ಪಕಲೆಯ ಯುನಿವರ್ಸಿಟಿ ಅಂದರೆ ಅತಿಶಯೋಕ್ತಿ ಏನಲ್ಲ.ಅದಕ್ಕಿಂತ ಹೆಚ್ಚೇ ಎಂದು ಹೇಳಬಹುದು.ಆದರೆ ನನ್ನ ಸಾಹಿತ್ಯ ಸಾಮರ್ಥ್ಯ ತುಂಬಾ ಲಿಮಿಟೆಡ್ ಆಗಿ ಭಾವನೆಗಳನ್ನು ಬರೆಯಲು ವ್ಯಕ್ತಪಡಿಸಲು ತೊಂದರೆಯಾಗುತ್ತಿದೆ.ಬೇಲೂರು ಒಂದು ದೇವಸ್ಥಾನ ನಿಜವಾಗಿಯೂ ಶಿಲ್ಪಕಲೆಯ ಸಾಮ್ರಾಜ್ಯ ಎಂದೇ ಹೇಳಬೇಕು.ಕಲೆ,ಸಾಹಿತ್ಯ,ಸಂಗೀತ ಇವುಗಳ ಬಗ್ಗೆ ಬರೆಯುವಾಗ ಸಾಮಾನ್ಯವಾಗಿ ನಾವು ಮೈಕೆಲೆಂಜಲೋ,ಷೇಕ್ಸಪಿಯರ್,wordswoth ಮೊಜಾರ್ಟ ಹೀಗೆ ವ್ಯಾಖ್ಯಾನಿಸುತ್ತೇವೆ ವಿನಹ ನಮ್ಮ ಕವಿ ಸಾಹಿತ್ಯಕಾರರ ಬಗ್ಗೆ ಬರೆಯಲು ಹೋಗುವುದಿಲ್ಲ.ಇದೊಂದು ಬಗೆಯ ಗುಲಮಗಿರಿಯೆಂದೆ ಎಣಿಸಬಹುದು ಮೈಕೆಲೆಂಜಲೋ  ಕೃತಿಯನ್ನು ನಾನು ನೋಡಿಲ್ಲ,ಆದರೂ ಬೇಲೂರಿನ ಹಳೆಬೀಡಿನ ದೇವಸ್ಥಾನಗಳನ್ನು ನೋಡಿದ ಬಳಿಕ ನಾವು ಪಾಲುಂಡು ಮೇಲುಂಬರೇ ಎಂಬಂತೆ ಬೇರೆ ಯಾವುದೇ ಶಿಲ್ಪ ಕೃತಿಗಳನ್ನು ನೋಡುವ ಅಗತ್ಯವಿಲ್ಲ.ಒಂದು ಮಂದಿರದ ಒಳಗೆ ಹೊರಗೆ ಒಂದು ಇಂಚು ಜಾಗ ಬಾಕಿ ಇಡದೇ ಕೆತ್ತನೆಗಳನ್ನು ಕೆತ್ತಿ ರಚಿಸಿದ್ದಾರೆ.ಈ ಮಂದಿರಗಳನ್ನು ಕಟ್ಟಲು ಸುಮಾರು ನೂರು ವರುಷ ಸಮಯ ತಗಲಿರಬಹುದು ಎಂದು ಅಲ್ಲಿದ್ದ ಒಬ್ಬರ ಅಂಬೋಣ.ಇರಬಹುದು.ನನಗೆ ನೂರಲ್ಲ ಸಾವಿರ ವರ್ಷ ಆಯಸ್ಸು ಕೊಟ್ಟರೂ ಅಲ್ಲಿನ ಭವ್ಯತೆಯ ಶೇಕಡಾ ಒಂದರಷ್ಟನ್ನು ಕೆತ್ತಲು,ಮಾಡಲು ಆಗಲಾರದು.ಶಿಲ್ಪಿಯು ಅಷ್ಟರ ಮಟ್ಟಿಗೆ ತಪಸ್ಸು ಮಾಡಿರಬೇಕು.ಆಗ ಮಾತ್ರ ಇಂತಹ ಅದ್ಭುತಗಳನ್ನು ಸೃಷ್ಟಿ ಮಾಡಲು ಸಾಧ್ಯ.ಅನ್ಯಥಾ ಆಗಲಾರದು.ಶ್ರೀ ಎಸ್ ಎಲ್ ಭೈರಪ್ಪನವರ ಸಾರ್ಥ ಕಾದಂಬರಿಯಲ್ಲಿ ಈ ಬಗ್ಗೆ ಉಲ್ಲೇಖ ಬರುತ್ತದೆ.ಕಾರಿಗರರು ಧ್ಯಾನ,ತಪಸ್ಸು,ಬ್ರಹ್ಮಚರ್ಯ ಇವುಗಳನ್ನು ಆಚರಿಸಿದರೆ ಮಾತ್ರ ಅವರ ಕೃತಿಗಳಲ್ಲಿ ಪೂರ್ಣತೆ,ಸೌಂದರ್ಯ,ಜೀವಂತಿಕೆ,ಮುಂತಾದುವುಗಳನ್ನು ಮೂಡಿಸಬಹುದು.ಈ ವಿಚಾರವನ್ನು ಅವರು ಕಾದಂಬರಿಯಲ್ಲಿ ವಿಸ್ತಾರವಾಗಿ ಚಿತ್ರಿಸಿದ್ದಾರೆ.ಅದು ಬೇರೆ ಯಾವುದೋ ಸನ್ನಿವೇಶದಲ್ಲಿ ಅವರು ಬರೆದಿದ್ದರೂ ಬೇಲೂರಿನ ಹಳೆಬೀಡಿನ ದರ್ಶನ ಮಾಡಿದಾಗ ಆ ಮಾತುಗಳು ಸರಿಯೆಂದು ಭಾಸವಾಗುತ್ತದೆ.ದೇವಸ್ಥಾನಗಳ ಶಿಲ್ಪಗಳ ವರ್ಣನೆ ಮಾಡಿದಷ್ಟು ಸಾಲದು.ಅದನ್ನು ಇನ್ನೊಮ್ಮೆ ಎಂದಾದರೂ ಖಯಾಲಿ ಬಂದಾಗ ದಾಖಲಿಸುತ್ತೇನೆ. 

No comments:

Post a Comment