ಐಹೊಳೆ ಪಟ್ಟದಕಲ್ಲು ಇವು ಈಗಿನ ಟರ್ಮಿನಾಲಜಿಯಲ್ಲಿ ಹೇಳುವುದಾದರೆ ಟ್ವಿನ್ಸಿಟೀಸ್. ಕಳೆದ ಬಾರಿ ಹೋದಾಗ ಸಂಜೆ ತುಂಬ ತಡವಾಗಿತ್ತು. ಮತ್ತು ಅಲ್ಲೇನೂ ಹೆಚ್ಚು ನೋಡುವಂತಹುದು ಇಲ್ಲ ಎಂದೊ ಏನೋ ಒಟ್ಟಾರೆ ಹಾಗೇ ಬಂದಿದ್ದೆವು. ಈಗ ಐಹೊಳೆ-ಪಟ್ಟದಕಲ್ಲು ಎರಡೂ ಕಡೆ ಸರಕಾರದ ವತಿಯಿಂದ ಒಳ್ಳೆಯ ವ್ಯವಸ್ಥೆ ಹಾಗೂ ದೇಖ್ಬಾಲ್ ಇದ್ದಂತೆ ತೋರುತ್ತದೆ. ಶುದ್ಧ, ಶುಭ್ರ ಪಾರ್ಕ್ನಂತಹ ಪರಿಸರ.ಕಾರಿನಿಂದ ಇಳಿದ ಕೂಡಲೇ ಖುಶಿ ಆಯಿತು.ಇಲ್ಲಿ ಭಗ್ನಗೊಂಡು ಅಲ್ಲಲ್ಲಿ ಮಾಯವಾಗಿದ್ದ ಶಿಲ್ಪ ದೇವಸ್ಥಾನಗಳ ಪುನರುತ್ಥಾನವನ್ನು ಬಹಳ ಕ್ರಮಬದ್ಧವಾಗಿ ಅಚ್ಚುಕಟ್ಟಾಗಿ ಮಾಡಿದ್ದಾರೆ. ಎಲ್ಲಾ ಕಲ್ಲುಗಳು ತಮ್ಮತಮ್ಮ ಒರಿಜಿನಲ್ ಸ್ಥಾನಗಳನ್ನು-ಆದಷ್ಟು ಮಟ್ಟಿಗೆ-ಪಡಕೊಂಡು ಶಿಲ್ಪ ಹಾಗೂ ದೇವಸ್ಥಾನ ಪುನಃ ಶೋಭಿಸುತ್ತಿವೆ. ಎಷ್ಟು ಹೊತ್ತು ನೋಡಿದ್ರೂ ಸಾಲದು ಎನಿಸುತ್ತಿದೆ. ಹಿಂದೆ ವಿಜಯನಗರ ಸಾಮ್ರಾಜ್ಯದಲ್ಲಿ ಸಂಪತ್ತು ಸುಖ ಸಮೃದ್ಧಿ ತುಂಬಿ ತುಳುಕುತ್ತಿದ್ದವು ಎಂದು ಪಾಠಗಳಲ್ಲಿ ಓದಿದ್ದೆ. ಅದು ಹೌದು. ರಾಜ್ಯದಲ್ಲಿ ಒಂದು ಉತ್ತಮ ಆಡಳಿತ ಕಾಲಕಾಲಕ್ಕೆ ಮಳೆಬೆಳೆ ಜನರಿಗೆ ಭದ್ರತೆ ಸಾಮಾಜಿಕ ನೆಮ್ಮದಿ ಇದ್ದರೆ ಮಾತ್ರ ಶಿಲ್ಪ, ಸಂಗೀತ, ನಾಟ್ಯ ಅಥವಾ ಇತರೇ ವಿದ್ಯೆಗಳ ಅಭಿವೃದ್ಧಿ ಸಾಧ್ಯ. ಯಾವನೇ ವ್ಯಕ್ತಿ ತನ್ನ ಅಂತರಂಗದಲ್ಲಿನ ವಿದ್ಯೆ ವಿಶೇಷಗಳಲ್ಲಿ ಅಭಿವೃದ್ಧಿ ಹೊಂದಬೇಕಿದ್ದರೆ ತಾನು ಸ್ವತಹ ಶ್ರೀಮಂತನಾಗಬೇಕಿಲ್ಲ. ಆದರೆ ಊರು ದೇಶ ಗಳಲ್ಲಿ ಶಾಂತಿ ಸಮಾಧಾನ ಇರಬೇಕಾಗುತ್ತದೆ ಇದು ನನ್ನ ಕಿಂಚಿತ್ ಅಭಿಪ್ರಾಯ. ಹೌದೋ ಅಲ್ಲವೋ ತಿಳಿದವರು ಹೇಳಬೇಕು. ಹಿಂದೆ ಕದಂಬ, ಚಾಲುಕ್ಯ ಹಾಗೂ ಇತರ ಕೆಲವು ಸಾಮ್ರಾಜ್ಯಗಳ ಆಳ್ವಿಕೆಯ ಸಮಯದಲ್ಲಿ ಸುಖ-ಸಂಪತ್ತು ಮಾತ್ರವಲ್ಲದೇ ಕಲಾವಿದರಿಗೆ ಸವಲತ್ತು ಸೌಲಭ್ಯ ಮರ್ಯಾದೆಗಳು ಆಡಳಿತ ಹಾಗೂ ಸಮಾಜದಿಂದ ದೊರೆಯುತ್ತಿರಬೇಕು. ಆದ್ದರಿಂದ ಉತ್ತಮಗಳಲ್ಲಿ ಅತ್ಯುತ್ತಮ ಎನಿಸುವಂತಹ ಶಿಲ್ಪಕಲೆಯ ಬೆಳವಣಿಕೆ ನಾವು ನೋಡಬಹುದು. ಇವನ್ನು ನಾವು ಹಂಪಿ ಮತ್ತಿತರ ಕಡೆಗಳಲ್ಲಿ ನೋಡುತ್ತೇವೆ. ಫೂಟ್ರೂಲ್ ಹಿಡಕೊಂಡು ಸರಿಯಾಗಿ ನಾಲ್ಕು ಲೈನು ಎಳೆಯುವ ತಾಳ್ಮೆ ನನಗಿಲ್ಲ. ಹಾಗಿರುವಾಗ ಅದೆಷ್ಟು ದೇವಳ, ಮೂರ್ತಿಗಳು, ಕೆತ್ತನೆಗಳು!ಅವುಗಳಲ್ಲಿ ಅವೆಷ್ಟು ವೈವಿಧ್ಯ! ಅವೇನು ಸೌಂದರ್ಯ! ಒಬ್ಬ ಕವಿ ಯಾ ಭಾವುಕ ಮನುಷ್ಯನಾಗಿದ್ದರೆ ಹುಚ್ಚನೇ ಆಗುತ್ತಾನೆ. ನನಗೂ ಒಂದೆರಡು ಕಡೆ ಮನವು ಭಾವದಲ್ಲಿ ಬಿದ್ದು ತನ್ಮಯನಾದೆ. ಮುಂದೆ ಹೊರಡಲು ಕಾಲೇಳಲಿಲ್ಲ.ಇನ್ನು ಈ ಎರಡು ಕಡೆಗಳಲ್ಲಿ ಏನೆಲ್ಲ ನೋಡಿದೆವೆಂದು ಬರೀತಾ ಇದ್ದರೆ ಪುನರಾವರ್ತನೆ ಆಗುತ್ತದೆ. ಆದರೂ ಸರಕಾರದ, ಭಾರತೀಯ ಪುರಾತತ್ವ ವಿಭಾಗದ ಜನರಿಗೆ ಶಭಾಸ್ ಹೇಳಬೇಕು. ಅವರ ಕೆಲಸವೇ ಇರಬಹುದು ಆದ್ರೂ ಈ ಸ್ಮಾರಕಗಳನ್ನು ಬಹುಮಟ್ಟಿಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಹಣೆಬರಹ, ಸಂಕುಚಿತ ಭಾವನೆಗಳಿಂದಾಗಿ ಸರಿಯಾಗಿ ನಾವು ಈ ಶಿಲ್ಪ,ಕಲೆ, ದೇವಾಲಯಗಳನ್ನು ಅವುಗಳ ಮೂಲ ವೈಭವ, ಔನ್ನತ್ಯಗಳಲ್ಲಿ ಉಳಿಸಿಕೊಳ್ಳಲು ಅಸಮರ್ಥರಾದೆವು. ಅದು ವಿಚಾರ ಬೇರೆ.
ಮರುದಿನ-೨೫, ಜನವರಿ ೨೦೧೧-ಲಕ್ಕುಂಡಿಗೆ ಸಾಗಿದೆವು. ಗದಗದಿಂದ ಹೆಚ್ಚು ದೂರವಿಲ್ಲ. ಇಲ್ಲೂ ಅಷ್ಟೆ. ಎಲ್ಲಿ ಅಗೆದರೂ ಅಲ್ಲಿ ಒಂದಲ್ಲ ಒಂದು ಶಿಲ್ಪ, ಒಡೆದು ಹೋದ ವಿಗ್ರಹ ಯಾ ವಿನಾಶಗೊಂಡ ದೇವಸ್ಥಾನದ ಭಾಗ ಸಿಗುತ್ತಲೇ ಇದೆಯಂತೆ. ಊರಲ್ಲಿ ಒಂದು ಸಂಗ್ರಹಾಲಯವಿದೆ. ಹೀಗೆ ಸಿಕ್ಕಿರುವ ಶಿಲ್ಪ, ಶಿಲ್ಪಗಳ ಅವಶೇಷಗಳ ದೊಡ್ಡ ಸಂಗ್ರಹವೇ ಇದೆ. ನಮಸ್ಕಾರ ನಾವು ಹೊರ ಊರಿಂದ ಬಂದಿದ್ದೇವೆ. ನಮಗೆ ಸ್ವಲ್ಪ ಮಾಹಿತಿ ಬೇಕು, "ಮಂಗ್ಳೂರ್ ಕಡೀಂದ ಬಂದೀರೇನ್ರೀ? ಬರ್ರಿ ಬರ್ರಿ" ಸ್ವಾಗತ ದೊರೆಯಿತು. ಅಲ್ಲದೇ ಲಕ್ಕುಂಡಿಯ ಬಗ್ಗೆ ಮಾಹಿತಿ ಕೊಟ್ಟರು. ಒಂದು ದೇವಸ್ಥಾನವಿದೆ. ಒಂದು ಕೆರೆಯಿದೆ. ಕೆರೆಯ ಆವರಣದಲ್ಲಿ ಎರಡು ಬೋರೆಹಣ್ಣಿನ ಮರಗಳಿದ್ದಾವೆ. ಬೋರೇಹಣ್ಣುಗಳೇನೂ ಸಿಕ್ಕಲಿಲ್ಲ. ಆದರೆ ಒಂದೆರಡು ಕಾಯಿಗಳು ಸಿಕ್ಕವು. ಒಬ್ಬ ಬಹುಶ ಮರಗಳ ಕಾಂಟ್ರಾಕ್ಟ್ ವಹಿಸಿಕೊಂಡವನಿರಬೇಕು ಬಂದು ಹುಡುಕಿ ಹುಡುಕಿ ಎರಡು ಹಣ್ಣು ತೆಗೆದುಕೊಟ್ಟ. ದೇವಾಲಯವು ಯಥಾಪ್ರಕಾರ ಅದ್ಭುತವಾಗಿತ್ತು. ಸಂಗ್ರಹಾಲಯದಲ್ಲಿ ಅನೇಕ ಮಾಸ್ಟರ್ ಪೀಸ್ಗಳಿದ್ದಾವೆ. ಪಟ ತೆಗೀಲಿಕ್ಕಿಲ್ರೀ. ಆದೇಶ ಐತಿ" ಅಂದರು. "ಈಗ ನಿಮ್ಮ ಸಂಗ್ರಹಾಲಯ ಚಾಲೂ ಆಗಿಲ್ಲ ತಾನೆ? ಪಟ ತೆಗೆಯಬಹುದು, ನಿಮಗೆ ಏನೂ ಕಾನೂನಿನ ಸಮಸ್ಯೆ ಬರುವುದಿಲ್ಲ. ಮತ್ತು ಇದು ನಮ್ಮ ವೈಯಕ್ತಿಕ ಉಪಯೋಗಕ್ಕೆ. ಮಾರಾಟಕ್ಕಲ್ಲ. ದಯಮಾಡಿ ಒಪ್ಪಿಗೆ ಕೊಡಿ" ಎಂದು ಒಪ್ಪಿಸಿ ಕೆಲವು ಚಿತ್ರಗಳನ್ನು ತೆಗೆದೆವು. ಐಹೊಳೆ-ಪಟ್ಟದಕಲ್ಲು ಎಲಿಮೆಂಟರಿ ಸಾಲಿ. ಲಕ್ಕುಂಡಿ, ಹಂಪಿ ಇವು ಹೈಸ್ಕೂಲ್ ಮತ್ತು ಬೇಲೂರು ಹಳೇಬೀಡು ಇವು ಕೊಲೇಜು" ನಮ್ಮೊಡನೆ ಇದ್ದ ಅಲ್ಲಿಯ ಮಹನೀಯರು ಆ ಭಾಗದ ಶಿಲ್ಪ ವೈಭವದ ಬಗ್ಗೆ ತನ್ನ ವಿಮರ್ಶೆ ವ್ಯಕ್ತಪಡಿಸಿದರು.ಅವರ ಮಾತು ಸರಿ.
ಮರುದಿನ-೨೫, ಜನವರಿ ೨೦೧೧-ಲಕ್ಕುಂಡಿಗೆ ಸಾಗಿದೆವು. ಗದಗದಿಂದ ಹೆಚ್ಚು ದೂರವಿಲ್ಲ. ಇಲ್ಲೂ ಅಷ್ಟೆ. ಎಲ್ಲಿ ಅಗೆದರೂ ಅಲ್ಲಿ ಒಂದಲ್ಲ ಒಂದು ಶಿಲ್ಪ, ಒಡೆದು ಹೋದ ವಿಗ್ರಹ ಯಾ ವಿನಾಶಗೊಂಡ ದೇವಸ್ಥಾನದ ಭಾಗ ಸಿಗುತ್ತಲೇ ಇದೆಯಂತೆ. ಊರಲ್ಲಿ ಒಂದು ಸಂಗ್ರಹಾಲಯವಿದೆ. ಹೀಗೆ ಸಿಕ್ಕಿರುವ ಶಿಲ್ಪ, ಶಿಲ್ಪಗಳ ಅವಶೇಷಗಳ ದೊಡ್ಡ ಸಂಗ್ರಹವೇ ಇದೆ. ನಮಸ್ಕಾರ ನಾವು ಹೊರ ಊರಿಂದ ಬಂದಿದ್ದೇವೆ. ನಮಗೆ ಸ್ವಲ್ಪ ಮಾಹಿತಿ ಬೇಕು, "ಮಂಗ್ಳೂರ್ ಕಡೀಂದ ಬಂದೀರೇನ್ರೀ? ಬರ್ರಿ ಬರ್ರಿ" ಸ್ವಾಗತ ದೊರೆಯಿತು. ಅಲ್ಲದೇ ಲಕ್ಕುಂಡಿಯ ಬಗ್ಗೆ ಮಾಹಿತಿ ಕೊಟ್ಟರು. ಒಂದು ದೇವಸ್ಥಾನವಿದೆ. ಒಂದು ಕೆರೆಯಿದೆ. ಕೆರೆಯ ಆವರಣದಲ್ಲಿ ಎರಡು ಬೋರೆಹಣ್ಣಿನ ಮರಗಳಿದ್ದಾವೆ. ಬೋರೇಹಣ್ಣುಗಳೇನೂ ಸಿಕ್ಕಲಿಲ್ಲ. ಆದರೆ ಒಂದೆರಡು ಕಾಯಿಗಳು ಸಿಕ್ಕವು. ಒಬ್ಬ ಬಹುಶ ಮರಗಳ ಕಾಂಟ್ರಾಕ್ಟ್ ವಹಿಸಿಕೊಂಡವನಿರಬೇಕು ಬಂದು ಹುಡುಕಿ ಹುಡುಕಿ ಎರಡು ಹಣ್ಣು ತೆಗೆದುಕೊಟ್ಟ. ದೇವಾಲಯವು ಯಥಾಪ್ರಕಾರ ಅದ್ಭುತವಾಗಿತ್ತು. ಸಂಗ್ರಹಾಲಯದಲ್ಲಿ ಅನೇಕ ಮಾಸ್ಟರ್ ಪೀಸ್ಗಳಿದ್ದಾವೆ. ಪಟ ತೆಗೀಲಿಕ್ಕಿಲ್ರೀ. ಆದೇಶ ಐತಿ" ಅಂದರು. "ಈಗ ನಿಮ್ಮ ಸಂಗ್ರಹಾಲಯ ಚಾಲೂ ಆಗಿಲ್ಲ ತಾನೆ? ಪಟ ತೆಗೆಯಬಹುದು, ನಿಮಗೆ ಏನೂ ಕಾನೂನಿನ ಸಮಸ್ಯೆ ಬರುವುದಿಲ್ಲ. ಮತ್ತು ಇದು ನಮ್ಮ ವೈಯಕ್ತಿಕ ಉಪಯೋಗಕ್ಕೆ. ಮಾರಾಟಕ್ಕಲ್ಲ. ದಯಮಾಡಿ ಒಪ್ಪಿಗೆ ಕೊಡಿ" ಎಂದು ಒಪ್ಪಿಸಿ ಕೆಲವು ಚಿತ್ರಗಳನ್ನು ತೆಗೆದೆವು. ಐಹೊಳೆ-ಪಟ್ಟದಕಲ್ಲು ಎಲಿಮೆಂಟರಿ ಸಾಲಿ. ಲಕ್ಕುಂಡಿ, ಹಂಪಿ ಇವು ಹೈಸ್ಕೂಲ್ ಮತ್ತು ಬೇಲೂರು ಹಳೇಬೀಡು ಇವು ಕೊಲೇಜು" ನಮ್ಮೊಡನೆ ಇದ್ದ ಅಲ್ಲಿಯ ಮಹನೀಯರು ಆ ಭಾಗದ ಶಿಲ್ಪ ವೈಭವದ ಬಗ್ಗೆ ತನ್ನ ವಿಮರ್ಶೆ ವ್ಯಕ್ತಪಡಿಸಿದರು.ಅವರ ಮಾತು ಸರಿ.
No comments:
Post a Comment